Monday, 14 November 2022
Wednesday, 12 October 2022
ರಾಜ್ಯ ಮಟ್ಟದ ನಾಟಕ ಸ್ಪರ್ಧೆ
ಕರ್ನಾಟಕ ನಾಟಕ ಅಕಾಡೆಮಿ ನೇತೃತ್ವದಲ್ಲಿ ರಾಜ್ಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ನಮ್ಮ ನಾಟಕ ಶಿಕ್ಷಕರಾದ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಜಾಪೂರ ಪ್ರೌಢಶಾಲೆಯಿಂದ ರಾಘವೇಂದ್ರ ಹಳೇಪೇಟೆ ಅವರು ರಚಿಸಿ ನಿರ್ದೇಶಿಸಿದ ನಾಟಕ "ಚಿಂದಿ" ಅತ್ಯುತ್ತಮ ಕಥಾವಸ್ತು ಹೊಂದಿದ್ದು ಮಕ್ಕಳು ನೈಜವಾದ ಅಭಿನಯ ಮನ ಮುಟ್ಟುವಂತೆ ಇತ್ತು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಘಟ್ಟಿಹೊಸಹಳ್ಳಿಯಿಂದ ಉದಯ ಗಾವಂಕರ ರಚಿಸಿದ ನಾಟಕ "ನಾವೆಲ್ಲ ಒಂದೇ" ನಾಟಕವನ್ನು ಚಿನ್ನಾ ಬಿ ಎಚ್ ಅವರ ನಿರ್ದೇಶನದಲ್ಲಿ ವ್ಯವಸ್ಥಿತವಾಗಿ ಮಕ್ಕಳು ಅಭಿನಯದ ಮೂಲಕ ಕಟ್ಟಿ ಕೊಟ್ಟರು. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಡೇಲಡಕು ಪ್ರೌಢಶಾಲಾ ಮಕ್ಕಳು "ಹಲಗಲಿಯ ಬೇಡರು" ನಾಟಕವನ್ನು ಶಿವನಾಯಕ ದೊರೆ ಅವರ ನಿರ್ದೇಶನದಲ್ಲಿ ಅಭಿನಯಿಸಿದರು. ಎಲ್ಲ ರಂಗ ಶಿಕ್ಷಕರಿಗೆ ಅಭಿನಂದನೆಗಳು.
Monday, 10 October 2022
Friday, 7 October 2022
Friday, 30 September 2022
Wednesday, 15 December 2021
ಮಾನ್ಯ ಷಡಕ್ಷರಿ ಸಿ ಎಸ್ ಅವರಿಗೆ ನಾಟಕ ಹಾಗೂ ನೃತ್ಯ ಶಿಕ್ಷಕರ ಮನವಿ ಸಲ್ಲಿಸಿದರು
ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಾನ್ಯ ಷಡಾಕ್ಷರಿಯವರು ಆಗಮಿಸಿದಾಗ ನಾನು ಹಾಗೂ ಶಾಂತಮಣಿಯವರು ನಮ್ಮ ಸಂಘದ ಪ್ರಮುಖ ಬೇಡಿಕೆಗಳ ಕುರಿತು ಗಮನ ಹರಿಸಲು ಮನವಿ ಪತ್ರವನ್ನು ನೀಡಿದೆವು.
Saturday, 11 December 2021
Subscribe to:
Posts (Atom)
























